
11th May 2025
ಕುಷ್ಟಗಿ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ ಹಿರಿಯ ಆಜೀವ ಸದಸ್ಯರು, ಸಾಹಿತಿಗಳು,ರಾಜ್ಯ ಹಿರಿಯ ನಾಗರಿಕ ಪ್ರಶಸ್ತಿ ಪುರಸ್ಕೃತರು, ಹೋರಾಟಗಾರರು ಆದ ತಾಜುದ್ದಿನ್ ದಳಪತಿ ಅವರ ನಿಧನ ತುಂಬಾ ದುಃಖದ ಸಂಗತಿ.. ಅವರ ಸ್ಮರಣಾರ್ಥವಾಗಿ ನಾಳೆ ದಿನಾಂಕ: ೧೨/೦೫/೨೦೨೫ ಸೋಮವಾರದಂದು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಅವರ ಆತ್ಮಕ್ಕೆ ಶಾಂತಿ ಕೋರಿ ಕುಷ್ಟಗಿ ನಗರದ ಹಳೆ ಪ್ರವಾಸಿ ಮಂದಿರದಲ್ಲಿ ಮುಂಜಾನೆ ೧೦:೩೦ ಕ್ಕೆ ಶ್ರದ್ಧಾಂಜಲಿ ಸಲ್ಲಿಸಲಾಗುವುದು.
ಕುಷ್ಟಗಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಎಲ್ಲಾ ಪದಾಧಿಕಾರಿಗಳು, ಕ.ಸಾ.ಪ ಆಜೀವ ಸದಸ್ಯರು, ಪತ್ರಿಕಾ ಮಾಧ್ಯಮದವರು ಉಪಸ್ಥಿತರಿರಬೇಕೆಂದು ಕೋರಲಾಗಿದೆ ಎಂದು ಗೌರವ ಕಾರ್ಯದರ್ಶಿ ಶರಣಪ್ಪ ಲೈನದ್ ಕೊರಿದ್ದಾರೆ
ಕುಷ್ಟಗಿ ಪಟ್ಟಣದ 15ನೇ ವಾರ್ಡಿನ ಗಾಂಧಿನಗರದ ಮುಸ್ಲಿಂ ಸಮಾಜದ ಹಿರಿಯರು, ಕಲ್ಯಾಣ ಕರ್ನಾಟಕ ರಾಜ್ಯ ಪ್ರಶಸ್ತಿ ಪುರಸ್ಕೃತರಾಗಿದ್ದ ತಾಜುದ್ದೀನ್ ತಂದೆ ಅಬ್ದುಲ್ ಸಾಬ್ ಆದೋನಿ (ದಳಪತಿ) ಇಂದು ಸಾಯಂಕಾಲ 4:30 ಗಂಟೆಗೆ ನಿಧರಾಗಿದ್ದಾರೆ.ಮೃತರು ಕುಷ್ಟಗಿ ಪಟ್ಟಣದ ದಳಪತಿಗಳಾಗಿ ಸುಮಾರು ವರ್ಷಗಳಿಂದ ಸೇವೆ ಸಲ್ಲಿಸಿದ್ದಾರೆ.